ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Monday, 1 July 2013

ಬಾಲ ಶಿಬಿರದ ಶಿಬಿರಾರ್ಥಿ ಅನುಭವ

Hariharapura Sridhar's videos on Dailymotion

Thursday, 27 June 2013

ಎರಡು ಅದ್ಭುತ ವೀಡಿಯೋಗಳು

ವೇದೋಕ್ತ ಜೀವನ ಶಿಬಿರ ಮಾಹಿತಿ

* ಹೊರ ಊರಿನಿಂದ ಶಿಬಿರ ಶುಲ್ಕ ಪಾವತಿಸಿರುವವರು 
1.ಶ್ರೀ ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2.ಶ್ರೀ ಸುಹಾಸ್ ದೇಶಪಾಂಡೆ,ಬೆಂಗಳೂರು
3.ಶ್ರೀ ಸುಬ್ರಹ್ಮಣ್ಯ, ಬೆಂಗಳೂರು
4.ಶ್ರೀಮತಿ ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
5.ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
6.ಶ್ರೀ ಗಿರೀಶ್ ನಾಗಭೂಷಣ್, ಬೆಂಗಳೂರು
* ಹೊರ ಊರಿನಿಂದ  ದೂರವಾಣಿಯ ಮೂಲಕ ನೊಂದಾಯಿಸಿಕೊಂಡಿರುವವರು
1.ಶ್ರೀ ವಿಶ್ವನಾಥ್ ಕಿಣಿ-ಪುಣೆ 
2.ಶ್ರೀ ಮೋಹನ್ ಕುಮಾರ್, ನಂಜನ ಗೂಡು
3.ಶ್ರೀಗುರುಪ್ರಸಾದ್, ಭದ್ರಾವತಿ
4.ಶ್ರೀ ಮಹೇಶ್, ಭದ್ರಾವತಿ
5.ಶ್ರೀ ಶಿವಕುಮಾರ್, ಬೆಂಗಳೂರು
6.ಶ್ರೀ ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ

ಶಿಬಿರಶುಲ್ಕವನ್ನು ಈಗಾಗಲೇ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಶುಲ್ಕ ಪಾವತಿಸಿರುವವರ ಪಟ್ಟಿಯಲ್ಲಿ ಹೆಸರು ಸೇರಿರದಿದ್ದಲ್ಲಿ ನೀವು ಶುಲ್ಕ ಪಾವತಿಸಿರುವ ಲಭ್ಯ ವಿವರವನ್ನು vedasudhe@gmail.com ಗೆ ಮೇಲ್ ಮೂಲಕ ತಿಳಿಸಲು ವಿನಂತಿಸುವೆ. 

ಒಟ್ಟು 40 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು ಹೊರ ಊರುಗಳಿಂದ 15 ಜನರಿಗೆ ಮತ್ತು ಹಾಸನ ಜಿಲ್ಲೆಯಿಂದ 25 ಸಂಖ್ಯೆಗೆ ಮಿತಿಗೊಳಿಸಲಾಗುವುದು. ಶುಲ್ಕ ಪಾವತಿಸಲು  ಕಡೆಯ ದಿನ ಜುಲೈ 15. 

Monday, 24 June 2013

ವೇದೋಕ್ತಜೀವನ ಶಿಬಿರ

ಓಂ
ವೇದಭಾರತೀ,ಹಾಸನ,

ವೇದೋಕ್ತಜೀವನ ಶಿಬಿರ

ಇದೇ ಆಗಸ್ಟ್ 23,24 ಮತ್ತು  25  ಮೂರು ದಿನಗಳ ವಸತಿ ಶಿಬಿರ

ಮಾರ್ಗದರ್ಶನ:
 ವೇದಾಧ್ಯಾಯೀ ಸುಧಾಕರಶರ್ಮ
ಬೆಂಗಳೂರು

ಸ್ಥಳ:  ಸಹೃದಯ  ಮಂದಿರ,ಶ್ರೀ ಶಂಕರಮಠದ ಆವರಣ,ಹಾಸನ

ಶುಲ್ಕ: 500:00 ರೂಗಳು

ಮೊದಲು ಬಂದ ಕೇವಲ 40  ಜನರಿಗೆ ಅವಕಾಶ

ನೊಂದಾಯಿಸಿಕೊಳ್ಳಲು ಕಡೆಯದಿನ 15.07.2013

ಹರಿಹರಪುರಶ್ರೀಧರ್-9663572406             ಕವಿನಾಗರಾಜ್-9448501804
---------------------------------------------------------------------
ತಾತ್ಕಾಲಿಕ ಸಮಯ ಸಾರಿಣಿ [ಶ್ರೀ ಸುಧಾಕರಶರ್ಮರ ಸಲಹೆಯ ಮೆರೆಗೆ ತಿದ್ದುಪಡಿಗೆ ಒಳಪಟ್ಟಿದೆ]

ಪ್ರಾತ:ಕಾಲ

5:00 ಉತ್ಥಾನ

5:00 ರಿಂದ 6:30  ಶೌಚ-ಸ್ನಾನ-ಪಾನೀಯ

6:30 ರಿಂದ 7:30 ಸಂಧ್ಯೋಪಾಸನೆ-ಅಗ್ನಿಹೋತ್ರ [ಶ್ರೀ ವಿಶ್ವನಾಥ ಶರ್ಮ]

7:30 ರಿಂದ 8:30  ಯೋಗ-ಪ್ರಾಣಾಯಾಮ[ಶ್ರೀ ಪಾರಸ್ ಮಲ್]

8:30 ರಿಂದ 9:30  ಉಪಹಾರ

9:30 ರಿಂದ 10:20 ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ [ ಶ್ರೀ ಸುಧಾಕರಶರ್ಮ] ಅವಧಿ-1  

10:30 ರಿಂದ 11:20 ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ [ ಶ್ರೀ ಸುಧಾಕರಶರ್ಮ] ಅವಧಿ-2  

11:30 ರಿಂದ 12:30  ವೇದಾಭ್ಯಾಸ [ಶ್ರೀ ವಿಶ್ವನಾಥ ಶರ್ಮ]

ಮಧ್ಯಾಹ್ನ

12:30 ರಿಂದ 3:00  ಭೋಜನ ವಿಶ್ರಾಂತಿ

3:00 ರಿಂದ 3:40 ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ [ ಶ್ರೀ ಸುಧಾಕರಶರ್ಮ] ಅವಧಿ-3

3:50 ರಿಂದ 4:30 ವೇದೋಕ್ತ ಜೀವನ ಕ್ರಮ ಉಪನ್ಯಾಸ-ಪ್ರಶ್ನೋತ್ತರ [ ಶ್ರೀ ಸುಧಾಕರಶರ್ಮ] ಅವಧಿ-4

4:30 ರಿಂದ 5:00- ಪಾನೀಯ

5:00 ರಿಂದ 7:00   ವೇದಾಭ್ಯಾಸ ಸಂಧ್ಯೋಪಾಸನೆ-ಅಗ್ನಿಹೋತ್ರ [ಶ್ರೀ ವಿಶ್ವನಾಥ ಶರ್ಮ]

ರಾತ್ರಿ

7:00 ರಿಂದ 8:00  ಉಪನ್ಯಾಸ [ ಶ್ರೀ ಸುಧಾಕರಶರ್ಮ] [ಸಾರ್ವಜನಿಕರಿಗೂ ಅವಕಾಶ ವಿರುತ್ತೆ]

8:00 ರಿಂದ 9:00 ಭೋಜನ

9:00 ರಿಂದ 10:00 ಅನೌಪಚಾರಿಕ

-: ಶಿಬಿರದ ವಿಶೇಷಗಳು :-

*   ಬೆಳಿಗ್ಗೆ ಮತ್ತು ಸಂಜೆ ವೈದಿಕ ಸಂಧ್ಯೋಪಾಸನಾ ಮತ್ತು ಅಗ್ನಿಹೋತ್ರ

*   ಪ್ರಾಣಾಯಾಮ ಮತ್ತು ಯೋಗಾಭ್ಯಾಸ

*   ವೇದ ಮಂತ್ರಾಭ್ಯಾಸ

*   ವೇದೋಕ್ತ ಜೀವನ ಪಥ-ಚಿಂತನೆ

*   ನಮ್ಮ ಅನುಮಾನಗಳಿಗೆ ಶ್ರೀ ಶರ್ಮರಿಂದ ಪರಿಹಾರ

*   ಶಿಬಿರ ಸಮಯ:  ಪ್ರಾತ: ಕಾಲ 6:00 ರಿಂದ ರಾತ್ರಿ 8:00

*   ವ್ಯವಸ್ಥೆ:  ವಸತಿ: ಪುರುಷರಿಗೆ ಮತ್ತು ಸ್ತ್ರೀಯರಿಗೆ ಪ್ರತ್ಯೇಕ.  ಸಾತ್ವಿಕ ಆಹಾರ -ವೇದೋಕ್ತ ವಿಚಾರ.

*   ಶಿಬಿರದಲ್ಲಿ ವೇದ ಸಾಹಿತ್ಯ ಮಾರಾಟಕ್ಕೆ ಲಭ್ಯ.

*  ಹೊರ ಊರುಗಳಿಂದ ಬಂದು ಪಾಲ್ಗೊಳ್ಳುವ  ಸ್ತ್ರೀ ಮತ್ತು ಪುರುಷರಿಗೆ  ಪ್ರತ್ಯೇಕವಾದ ಮಲಗುವ ಮತ್ತು ಸ್ನಾನ- ಶೌಚ    
     ಗೃಹದ  ವ್ಯವಸ್ಥೆ ಇರುತ್ತದೆ ಹೊರತೂ ಒಬ್ಬೂಬ್ಬರಿಗೂ ಪ್ರತ್ಯೇಕ ಕೊಠಡಿಗಳಿರುವುದಿಲ್ಲ.

*   ವೇದೋಕ್ತ ಜೀವನ ಶಿಬಿರವು ವಿಹಾರಕ್ಕಾಗಿ ಅಲ್ಲ.

*   ನಿಮ್ಮ ಯಾವುದೇ ಸಂದೇಹಗಳನ್ನು vedasudhe@gmail.com ಗೆ ಮೇಲ್ ಮಾಡಿ ತಿಳಿಸಿದರೆ ಉತ್ತರಿಸಲಾಗುವುದು.

* ಶಿಬಿರಾರ್ಥಿಗಳಿಗೆ ವಿವರವಾದ ಸೂಚನೆಯನ್ನು ಮುಂದೆ ಪ್ರಕಟಿಸಲಾಗುವುದು.ಶಿಬಿರಾರ್ಥಿಗಳು ತಮ್ಮ ಅಂಚೆ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು vedasudhe@gmail.com ಗೆ ಮೇಲ್ ಮಾಡಬೇಕಾಗಿ ಕೋರಿಕೆ.


* ಹೊರ ಊರಿನಿಂದ ಶಿಬಿರಾರ್ಥಿಗಳು [ 15 ಕ್ಕೆ ಮಿತಿಗೊಳಿಸಲಾಗುವುದು] 
1.ಶ್ರೀ ವಿಜಯಕುಮಾರ್ ಕಲ್ಯಾಣ್- ದೊಡ್ಡಬಳ್ಳಾಪುರ
2.ಶ್ರೀ ವಿಶ್ವನಾಥ್ ಕಿಣಿ-ಪುಣೆ 
3.ಶ್ರೀ ಮೋಹನ್ ಕುಮಾರ್, ನಂಜನ ಗೂಡು
4.ಶ್ರೀಗುರುಪ್ರಸಾದ್, ಭದ್ರಾವತಿ
5.ಶ್ರೀ ಮಹೇಶ್, ಭದ್ರಾವತಿ
6.ಶ್ರೀ ಗಿರೀಶ್ ನಾಗಭೂಷಣ್, ಬೆಂಗಳೂರು
7.ಶ್ರೀ ಶಿವಕುಮಾರ್, ಬೆಂಗಳೂರು
8.ಶ್ರೀ ಚಿತ್ತರಂಜನ್,ಕೈಗಾ, ಉ.ಕ.ಜಿಲ್ಲೆ
9.ಶ್ರೀ ಸುಬ್ರಹ್ಮಣ್ಯ, ಬೆಂಗಳೂರು
10.ಶ್ರೀಮತಿ ಪುಷ್ಪಾ ಸುಬ್ರಹ್ಮಣ್ಯ, ಬೆಂಗಳೂರು 
11.ರಾಧೇಶ್ಯಾಮ್ ಸುಬ್ರಹ್ಮಣ್ಯ, ಬೆಂಗಳೂರು 
12.ಶ್ರೀ ಸುಭಾಶ್ ದೇಶಪಾಂಡೆ,ಬೆಂಗಳೂರು
ಪ್ರವೇಶಾವಕಾಶ:
1. ಹಾಸನ: 15
2. ಚನ್ನರಾಯ ಪಟ್ನ: 10

Thursday, 20 June 2013

ಚರ್ಚೆ ಸಾಕೋ? ಅಧ್ಯಯನ ಬೇಕೋ?


ನನ್ನ ಹುಟ್ಟೂರಿನ ಯುವಕರಿಗೆ ನಮ್ಮ ಧಾರ್ಮಿಕ ಆಚರಣೆಗಳ , ನಂಬಿಕೆಗಳ ಬಗ್ಗೆ ಚರ್ಚೆ ಮಾಡುವಾಸೆ. ಅದಕ್ಕಾಗಿಯೇ ನಮ್ಮ ಯುಕರು ಒಂದು ಫೇಸ್ ಬುಕ್ ಗುಂಪನ್ನು ಮಾಡಿಕೊಂಡಿದ್ದಾರೆ. ಅಲ್ಲಿ ಈಗ "ದೇವರು ಮೈಮೇಲೆ"  ಬರುವ ಬಗ್ಗೆ ಚರ್ಚೆ ಆರಂಭವಾಗಿದೆ. ಅದು ಚರ್ಚೆಗಿಂತ ಹೆಚ್ಚಾಗಿ ಇದನ್ನು  ನಂಬುತ್ತೀರಾ? ಇಲ್ವಾ? ಸರಿಯೇ? ತಪ್ಪೇ? ಎಂಬ ನೇರವಾದ ಅಭಿಪ್ರಾಯವನ್ನು ಬಯಸಿದ್ದಾರೆ. ಒಂದು ವೇಳೆ ಅಲ್ಲಿರುವ ಎಪ್ಪತ್ತು ಎಂಬತ್ತು ಜನರಲ್ಲಿ ಐವತ್ತು ಜನ ಸರಿ ಎಂದರೆ ಅದು ಸರಿಯೇ? ಅಥವಾ ಐವತ್ತು ಜನ ಅದು ತಪ್ಪು ಎಂದರೆ ತಪ್ಪೇ? ಇದೇನು ಅಂಕಿಯ ಆಟವೇ? ಅದಕ್ಕೆ ನಾನು ಅಲ್ಲಿ ಚರ್ಚೆ ಮಾಡುವ ಬದಲು ನನ್ನ ಮುಖ ಪುಟದಲ್ಲಿ ಬರೆದು ನನಗೆ ಮೆಸ್ಸೇಜ್ ಮಾಡಿದವರಿಗೆ ಅಲ್ಲಿಯೇ ಬಂದು ನೋಡಲು   ತಿಳಿಸಿದೆ. ಅಲ್ಲೂ ಬಂದರು. ಮತ್ತೆ ಅದೇ ಪ್ರಶ್ನೆ. ಇದನ್ನು ಒಪ್ಪುತ್ತೀರಾ? ಇಲ್ವಾ? ನಾನು ಒಪ್ಪಿದರೇನು? ಬಿಟ್ಟರೇನು? ಸತ್ಯ ಎನ್ನುವುದನ್ನು ತಿರುಚಲು ಸಾಧ್ಯವೇ? ಅದಕ್ಕಾಗಿ ಅವರಿಗಾಗಿ ಬರೆದ ಸರಳ ಮಾತುಗಳನ್ನು ನೀವೂ ಓದ ಬಹುದು. ಈ ಬಗ್ಗೆ ಅಭಿಪ್ರಾಯವನ್ನೂ ಹಂಚಿ ಕೊಳ್ಳ ಬಹುದು.


ನಮ್ಮೂರ ಹುಡುಗರು " ದೇವರು ಮೈದುಂಬಿ ಬರುವುದರ" ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅಲ್ಲಿ ಚರ್ಚೆ ಮಾಡುತ್ತಾ ಹೋದರೆ ಕೆಲವರ ಮನಸ್ಸಿಗೆ ಬೇಸರವೂ ಆಗಬಹುದು.ಆದರೆ ಆ ಬಗ್ಗೆ ನನ್ನ ಅಭಿಪ್ರಾಯವನ್ನು ನನ್ನ ಮುಖಪುಟದಲ್ಲಿ ಪ್ರಕಟಿಸದಿದ್ದರೆ ಆತ್ಮವಂಚನೆ ಮಾಡಿದಂತಾಗುತ್ತದೆ. ದೇವರು ಮೈದುಂಬಿ ಬರುವುದನ್ನು ಚರ್ಚುಸುವ ಮುಂಚೆ ದೇವರ ಸ್ವರೂಪದಬಗ್ಗೆ ಚಿಂತನೆ ನಡೆಸ ಬೇಕಾಗುತ್ತದೆ. ಭಗವಂತನು ಸರ್ವಾಂತರ್ಯಾಮಿ, ನಿರಾಕಾರಿ ಎಂಬುದನ್ನು ವೇದವು ಹಲವು ಮಂತ್ರಗಳಲ್ಲಿ ಸಾರಿ ಹೇಳಿದೆ. ಅದರಿಂದಲೇ ನಮ್ಮ ಪೂರ್ವಜರು ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದರೇ ಹೊರತೂ ವಿಗ್ರಹಾರಾಧನೆಯನ್ನಲ್ಲ. ವಿಗ್ರಹಾರಾಧನೆ ಬಂದಿರುವುದೇ ಪುರಾಣದ ಕಾಲದಲ್ಲಿ. ನಾವು ತಿಳಿಯಬೇಕಾದುದೇನೆಂದರೆ ವೇದವನ್ನು ಅರ್ಥಮಾಡಿಕೊಳ್ಳುವುದು ಕ್ರಮೇಣ ಕಡಿಮೆಯಾದಾಗ ಭಗವಂತನ ಬಗ್ಗೆ ಹೇಗಾದರೂ ನಂಬಿಕೆ ಉಳಿಯಲಿ, ಎಂದು ನಮ್ಮ ಪೂರ್ವಜರು ವಿಗ್ರಹಾರಾಧನೆಯ ಆಚರಣೆ ತಂದರು. ಇದು ಯಾರಿಗೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳ ಬೇಕು. ಅರಿವು ಕಡಿಮೆ ಇದ್ದವರಿಗೆ ಆಚರಣೆಗೆ ತಂದ ಪದ್ದತಿಗಳು ಬರು ಬರುತ್ತಾ ಇದೇ ವೇದೋಕ್ತವೆನಿಸುವ ಮಟ್ಟಿಗೆ ಬೆಳೆಯಿತು. ನಿಜವಾಗಿ ಅರಿವಿನ ಕೊರತೆ ಇದ್ದವನು ಮಾಡ ಬೇಕಾದುದನ್ನು ಪಂಡಿತರೂ ಕೂಡ ಮಾಡಲಾರಂಭಿಸಿದರು. ಯಾವಾಗ ಪಂಡಿತರೇ ವಿಗ್ರಹಾರಾ ಧನೆ ಆರಂಭಿಸಿದರೂ ಚೆನ್ನಾಗಿಯೇ ಬಣ್ಣ ಕಟ್ಟಿದರು. ಜನರೂ ಒಪ್ಪಿದರು." ದೇವ ನೊಬ್ಬ ನಾಮ ಹಲವು" ಎನ್ನುತ್ತಾ ರೂಪವನ್ನೂ ಹಲವು ಮಾಡಿ ಬಿಟ್ಟರು. ದೇವರಲ್ಲಿಯೇ ಪತಿ-ಪತ್ನಿ ಸಂಬಂಧವನ್ನು ಕೂಡ ತಂದು ಬಿಟ್ಟರು. ಇಷ್ಟೆಲ್ಲಾ ಆದ ಮೇಲೆ ಅವನಿಗೆ ಸ್ನಾನ ಬೇಡವೇ? ನೈವೇದ್ಯ ಬೇಡವೇ? ಅಷ್ಟೇ ಅಲ್ಲ ಜೋಗುಳ ಹೇಳಿ ಮಲಗಿಸಿಯೂ ಬಿಟ್ಟರು. ಈಗ ಯೋಚನೆ ಮಾಡಬೇಕು. ಇಡೀ ಬ್ರಹ್ಮಾಂಡವನ್ನು ನಿಯಂತ್ರಿಸುವ ಆ ಭಗವಂತನು ನಿದ್ರಿಸಿಬಿಟ್ಟರೆ ಪ್ರಪಂಚದ ಗತಿ  ಏನಾಗಬೇಕು!!

         ಈ ಮಾತಿಗೆಲ್ಲಾ ವೇದ ಮಂತ್ರದ ಆಧಾರವಿದೆ. ಸಮಯ ಬಂದಾಗ ಬರೆಯುವೆ. ಈಗ ದೇವರು ಮೈದುಂಬಿಬರುವ ಬಗ್ಗೆ ವಿಚಾರ ಮಾಡಬೇಕಲ್ಲವೇ? ಇದನ್ನು ನಿರಾಕರಿಸುವಂತೂ ಇಲ್ಲ, ಒಪ್ಪಿಕೊಳ್ಳುವಂತೂ ಇಲ್ಲ. ಕಾರಣ ದೇವರು ಮೈ ದುಂಬಿ ಬಂದಿದ್ದ ವ್ಯಕ್ತಿ ತನ್ನ ಸಹಜ ಸ್ಥಿತಿ ಯಲ್ಲಿರುವುದಿಲ್ಲ. ಹಾಗಾಗಿ ಅವನು ತನ್ನ ಸಹಜ ಸ್ಥಿತಿಯಲ್ಲಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕು. ಆದರೆ ದೇವರು ಮೈ ದುಂಬಿದೆಯೇ? ಎಂದರೆ ನಿಮಗೆ ಸರಿಯಾದ ಉತ್ತರ ಸಿಗಲಾರದು. ಆ ವ್ಯಕ್ತಿ ಲೌಕಿಕ ಪ್ರಪಂಚವನ್ನು ಮರೆತು ಅಲೌಕಿಕದಲ್ಲಿ ಧ್ಯಾನಾಸಕ್ತನಾಗಿದ್ದರೆ , ಅದೇ ಸಮಯಕ್ಕೆ ಯಾವುದಾದರೂ ದೇವರ ಹೆಸರನ್ನು ಮನದಲ್ಲಿ ತುಂಬಿಕೊಂಡಿದ್ದರೆ ಅವನು ಅಸಹಜವಾಗಿ ವರ್ತಿಸಬಹುದು. ಮನಸ್ಸಿನಲ್ಲಿ ಯೋಚಿಸುತ್ತಿದ್ದ ವಿಷಯಗಳ ಬಗ್ಗೆ ಬಡಬಡಿಸಬಹುದು.ಅವನ ಸ್ಥಿತಿ ಅಸಹಜವಾಗಿದೆ! ಬಾಯಲ್ಲಿ ಭಕ್ತರಿಗೆ ಬೇಕಾದ ಮಾತುಗಳು ಬರುತ್ತಿವೆ!! ಆಗ ಸಹಜವಾಗಿ ಜನರು ಹೇಳುತ್ತಾರೆ" ದೇವರು ಮೈ ದುಂಬಿದೆ!! ಇಲ್ಲಿ ಮೈದುಂಬಿಸಿಕೊಂಡವನನ್ನು ಖಂಡಿಸುವಂತಿಲ್ಲ. ಕಾರಣ ಆ ಸಮಯದಲ್ಲಿ ಅವನು ಏನು ಮಾಡುತ್ತಿದ್ದಾನೆಂಬ ಅರಿವು ಅವನಿಗಿರಲಾರದು. ಆದರೆ ಮನಸ್ಸಿನಲ್ಲಿದ್ದುದೆಲ್ಲಾ ಹೊರಬಂದಿದೆ! ಇದೊಂದು ರೀತಿಯ ಮಾನಸಿಕ ವಿಜ್ಞಾನದಿಂದ ತಿಳಿಯಬೇಕಾದ ಅಂಶವೆಂದರೆ ಕೆಲವರು ಒಪ್ಪುವುದಿಲ್ಲ. ಇವನು ದೈವ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಲು ಹೇಸುವುದಿಲ್ಲ.ಇದಕ್ಕೆಲ್ಲಾ ಪ್ರತ್ಯಕ್ಷವಾಗಿ ಕಂಡಿರುವ ಹಲವು ಉಧಾಹರಣೆಗಳಿವೆ. ಯುವಕರು ಈ ವಿಚಾರವನ್ನು ಚರ್ಚಿಸುವುದಲ್ಲ, ಅಧ್ಯಯನ ಮಾಡಬೇಕು. ಪ್ರಜಾಪ್ರಭುತ್ವ ಪದ್ದತಿಯಂತೆ ಹತ್ತು ಜನ ಇದು ಸರಿ ಎಂದರೆ ಸರಿ ಯಾಗುವುದಿಲ್ಲ ಹತ್ತು ಜನ ತಪ್ಪು ಎಂದರೆ ತಪ್ಪಾಗುವುದಿಲ್ಲ. ನಮಗೆ ಎಲ್ಲಕ್ಕೂ ಆಧಾರ ವೇದ. ವೇದವು ಈ ಬೂಟಾಟಿಕೆಯನ್ನು ಒಪ್ಪುವುದಿಲ್ಲ.


ಅಧ್ಜ್ಯಯನ ಮಾಡಲು ಸಮಯ ಸಾಲದಾದರೆ ಇತ್ತೀಚೆಗೆ ದೂರದರ್ಶನದಲ್ಲಿ ಉತ್ತಮ ಕಾರ್ಯಕ್ರಮಗಳ ಪ್ರಸಾರವಾಗುತ್ತಿದೆ. ಅದರಲ್ಲಿ ಒಂದು ಜನಶ್ರೀಯಲ್ಲಿ  ಪ್ರತಿದಿನ ಬೆಳಿಗ್ಗೆ 7.15 ರಿಂದ 7.45 ರ ಮಧ್ಯೆ  ಹತ್ತು ನಿಮಿಷಗಳ ಅವಧಿಯ ಮೂರು ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಅದರಲ್ಲಿ ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು  ಸತ್-ಚಿತ್-ಆನಂದ ಪದಗಳ   ವಿಮರ್ಶೆ ಮಾಡುತ್ತಿದ್ದಾರೆ. ಭಗವಂತನ ನಿಜವಾದ ಸ್ವರೂಪವಾದ ಸಚ್ಚಿದಾನಂದ ಸ್ವರೂಪದ ಬಗ್ಗೆ ತಿಳಿದುಕೊಳ್ಳಲು ಆ ಕಾರ್ಯಕ್ರಮ ನೋಡಬೇಕು. ಅವರ ಮಾತು ವೇದಕ್ಕೆ ಅನುಗುಣವಾಗಿದ್ದರೆ ಒಪ್ಪಬಹುದು. ಇಲ್ಲವಾದರೆ ಆಧಾರಸಹಿತ ಯಾವ ವಿಚಾರದಲ್ಲಿ ತಪ್ಪಾಗಿದೆ ಎಂದು ಹೇಳುವ ಅಧಿಕಾರವು ನೋಡುಗರಿಗೆ ಇದ್ದೇ ಇದೆ.

Wednesday, 5 June 2013

ಬ್ರಾಹ್ಮಣ ಅಂದರೆ ಯಾರು?

ಬ್ರಾಹ್ಮಣ ಅಂದರೆ ಯಾರು?  ಬನ್ನಂಜೆ ಗೋವಿಂದಾಚಾರ್ಯರ ಈ ಆಡಿಯೋವನ್ನು ಒಮ್ಮೆಕೇಳಿದ ನೆನಪೇ! ಇರಲಿ. ಮೂರು ನಿಮಿಷ ಕೇಳಿಬಿಡಿ.



ಕೃಪೆ: ಕನ್ನಡ ಆಡಿಯೋ ಡಾಟ್ಕಾಮ್

Wednesday, 22 May 2013

ಕುಸುಮ-8


ಎಲ್ಲರಿಗಾಗಿ ವೇದ
                                                                ದಿನಾಂಕ: 23.12.2012
ವೇದದ ಹಿರಿಮೆ ಬಗ್ಗೆ  ಒಂದು ಮಂತ್ರವನ್ನು ಇಂದು ನೋಡೋಣ.
[ಅಥರ್ವ: 8-2-25]
ಸರ್ವೋ ವೈ ತತ್ರ ಜೀವತಿ ಗೌರವಶ್ವ: ಪುರುಷ: ಪಶು: |
ಯತ್ರೇದಂ ಬ್ರಹ್ಮ ಕ್ರಿಯತೇ ಪರಿಧಿರ್ಜೀವನಾಯ  ಕಮ್ ||
ಪದಾರ್ಥ:
ಯತ್ರ = ಎಲ್ಲಿ
ಇದಂ ಬ್ರಹ್ಮ= ಈ ವೇದ ಜ್ಞಾನವು 
ಕಮ್ = ಅನುಕೂಲವಾದ  ರೀತಿಯಲ್ಲಿ
ಜೀವನಾಯ ಪರಿಧಿ: ಕ್ರಿಯತೇ =  ಜೀವನವನ್ನು ಸುತ್ತುಗಟ್ಟುತ್ತದೋ
ತತ್ರ = ಅಲ್ಲಿ
ಗೌ: = ಗೋವು
ಅಶ್ವ: = ಕುದುರೆ
ಪುರುಷ: =ಮಾನವ
ಪಶು: = ಪ್ರಾಣಿಗಳು
ಸರ್ವ = ಎಲ್ಲರೂ
ವೈ = ನಿಜವಾಗಿ
ಜೀವತಿ = ಜೀವಿಸುತ್ತವೆ

ಭಾವಾರ್ಥ:
ಎಲ್ಲಿ ವೇದವು ನಮ್ಮ ಜೀವನದ ಜೊತೆಯಲ್ಲಿ ಆವರಿಸಿರುವುದೋ ಅಲ್ಲಿ  ಮನುಷ್ಯ   ಮಾತ್ರವಲ್ಲದೇ ಗೋವುಗಳು, ಕುದುರೆ ಹಾಗೂ ಎಲ್ಲಾ ಜೀವಿಗಳೂ ಕೂಡ ನಿಜವಾಗಿ ಜೀವಿಸುತ್ತವೆ.
ಅಂದರೆ  ಈ ಮಂತ್ರವು ಏನು ಹೇಳುತ್ತದೆ? ವೇದ ಜ್ಞಾನವು  ಎಲ್ಲಿ ಇರುತ್ತದೋ ಅಲ್ಲಿ ಎಲ್ಲಾ ಜೀವಿಗಳೂ ನಿಜವಾಗಿ ಜೀವಿಸುತ್ತವೆಂದರೆ  ಮನುಷ್ಯನ ಜೊತೆಗೆ, ಪ್ರಾಣಿ ಪಕ್ಷಿಗಳೂ ಅಷ್ಟೇ ಅಲ್ಲ ಅಲ್ಲಿರುವ ಗಿಡಮರ ಬಳ್ಳಿಗಳೂ ಕೂಡ ನಿಜವಾಗಿ  ಅಂದರೆ ಯಾವ ನೋವಿಲ್ಲದೆ ಬಾಳುತ್ತವೆ. ಅದು ಹೇಗೆ ಸಾಧ್ಯ? ಎಂಬ ಬಗ್ಗೆ ಸ್ವಲ್ಪ ಚಿಂತನ-ಮಂಥನ ನಡೆಸಿದರೆ ನಮಗೆ ಅರಿವಾಗುವುದೇನೆಂದರೆ ವೇದದ ಅರಿವಿರುವ ಕಡೆ  ಮನುಷ್ಯನು ಪ್ರಕೃತಿ ಸಂಪತ್ತನ್ನು ಲೂಟಿ ಮಾಡುವುದಿಲ್ಲ, ಎಲ್ಲರಲ್ಲೂ ಮೈತ್ರಿಭಾವ ಹೊಂದಿರುತ್ತಾನಾದ್ದರಿಂದ ಎಲ್ಲರೂ ತನ್ನಂತೆ   ಎಂಬ ಭಾವನಾತ್ಮಕ ಸಂಬಂಧವು ಅಲ್ಲಿರುತ್ತದೆ. ಆದ್ದರಿಂದ  ಅಲ್ಲಿ ಯಾರೂ ಹಸಿವಿನಿಂದ ಇರಬೇಕಾಗಿಲ್ಲ. ಕೆಳಗೆ ಬಿದ್ದವರನ್ನು ಮೇಲೆತ್ತುತ್ತಾ, ತಾನು ಅದಕ್ಕಿಂತ ಮೇಲೇರುತ್ತಾ ಪುನ: ತನಗಿಂತ ಹಿಂದುಳಿದವರನ್ನು ಮತ್ತೊಮ್ಮೆ ಕೈ ಹಿಡಿದು ಮೇಲೆತ್ತುತ್ತಾ  ಹೀಗೆ ಜೊತೆಯಲ್ಲಿ ಕರೆದುಕೊಂಡು ಹೋಗುವ  ಈ ವಿಚಾರದ ಬಗ್ಗೆ ಸ್ವಲ್ಪ ಚಿಂತನೆ ಮಾಡಿದರೆ ನಮಗೆ ಹೀಗೆನಿಸಬಹುದು………
ಕೆಳಗೆ ಬಿದ್ದವರನ್ನು ಕೈಹಿಡಿದು ಮೇಲೆತ್ತಿ ತನ್ನಮಟ್ಟಕ್ಕೆ ಏರಿಸಿಕೊಂಡಾಗ ಅದು  all are equal ಎಂಬ ಸಮಾಜವಾದ ಆಗದೆ ಇರದು.ಸಮಾಜವಾದವು ಈ ಸ್ಥರದಲ್ಲಿ ನಿಂತು ಬಿಡುತ್ತದೆ. ಎಲ್ಲರೂ ಸಮನಾದ ಮೆಲೆ ಮುಂದೇನು? ಎಂದರೆ ಸಮಾಜವಾದದಲ್ಲಿ ಉತ್ತರವಿಲ್ಲ. ಆದರೆ ವೇದವು ಪುನ: ಕರೆಕೊಡುತ್ತದೆ” ನೀನು ನಿನ್ನ ಸಾಮರ್ಥ್ಯಬಳಸಿಕೊಂಡು ಜೊತೆಯಲ್ಲಿದ್ದವರಿಗಿಂತಲೂ ಮೇಲೇರು”   ಹೀಗೆಂದಾಗ ನೀನು ಶ್ರೀಮಂತನಾಗು, ವಿದ್ವಾಂಸನಾಗು, ಎಂದು ಕರೆಕೊಡುವ ವೇದವು ಅಲ್ಲಿಗೂ ನಿಲ್ಲುವುದಿಲ್ಲ. ನೀನು ಮೇಲೇರಿದಾಗ ಇನ್ನು ಕೆಲವರು ಹಿಂದೆ ಉಳಿದರಲ್ಲವೇ? ಈಗ ಅವರ ಕೈ ಹಿಡಿದು ಮೇಲೆತ್ತು ,ಎಲ್ಲಿಯವರಗೆ…ಎಂದರೆ ಅದು ಕಾಟಾಚಾರದ ಮಾತಲ್ಲ.  ನಿಜವಾಗಿ ಹಿಂದುಳಿದಿದ್ದವನು ನಿನ್ನ ಎತ್ತರಕ್ಕೆ ಬರುವ ವರೆಗೂ ಅವನನ್ನು ಮೇಲೆತ್ತುವ ಹೊಣೆ ನಿನ್ನದು”-  ಎಂದು    ವೇದವು ಎಚ್ಚರಿಸುತ್ತದೆ. ಪುನ: ಅಷ್ಟಕ್ಕೆ ಸುಮ್ಮನಾಗುವಂತಿಲ್ಲ. ಪುನ: ನಿನ್ನ ಸಾಮರ್ಥ್ಯ ಉಪಯೋಗಿಸಿಕೊಂಡು ಮೇಲೇರು ನಂತರ ಹಿಂದೆ ಬಿದ್ದವರನ್ನು ನಿನ್ನ ಎತ್ತರಕ್ಕೆ ಪ್ರೀತಿಯಿಂದ ಕೈ ಹಿಡಿದು ಎತ್ತು”
ಹೀಗೆ  ಈ ಪ್ರಕ್ರಿಯೆಗಳು ನಿರಂತರ. ನಾವು ಸಂಪತ್ತು ಗಳಿಸಿದೆವೆಂದು ಸುಮ್ಮನಿರುವಂತಿಲ್ಲ. ವಿದ್ವಾಂಸನಾಗಿಬಿಟ್ಟೆ ನೆಂದು ಮೈಮರೆಯುವಂತಿಲ್ಲ. ತಾನು ಬೆಳೆಯುತ್ತಾ, ಜೊತೆಯಲ್ಲಿರುವವರನ್ನೂ ಬೆಳೆಸುತ್ತಾ ಯಾವಾಗಲೂ ಕ್ರಿಯಾಶೀಲನಾಗಿರಬೇಕೆಂದು ಕರೆ ಕೊಡುವ ವೇದಕ್ಕೆ  ಸರಿಸಾಟಿ ಉಂಟೆ?