ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Wednesday 31 October 2012

ವಿಶೇಷ ಮಂತ್ರಾಭ್ಯಾಸ


ಆತ್ಮೀಯ ವೇದಾಭಿಮಾನಿಗಳಲ್ಲಿ ನಮಸ್ಕಾರಗಳು.

             ಕಳೆದ ಆಗಸ್ಟ್ 19 ರಂದು ಆರಂಭವಾದ "ಎಲ್ಲರಿಗಾಗಿ ಸಾಪ್ತಾಹಿಕ ವೇದ ಪಾಠವು"  ಯಶಸ್ವಿಯಾಗಿ ನಡೆಯುತ್ತಿದ್ದು ಪ್ರತ್ಯಕ್ಷವಾಗಿ ಸುಮಾರು 40 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರೆ, ವೆಬ್ ಸೈಟ್ ಮೂಲಕ ಹಲವರು ಮತ್ತು ಸುಮಾರು 40 ವಿದ್ಯಾರ್ಥಿಗಳು ಈ ಮೇಲ್ ಮೂಲಕ ಪಾಠವನ್ನು ತರಿಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಮತ್ತು ಚನ್ನರಾಯಪಟ್ಟಣದ ವೇದಾಧ್ಯಾಯೀ ಶ್ರೀ ಪ್ರಸಾದ್ ಅವರು ಪಾಠವನ್ನು ಮಾಡುತ್ತಿದ್ದಾರೆ. ಇದುವರೆವಿಗೆ ...
1. ವಿಶ್ವಾನಿ ದೇವ  [ ಯಜು.30.3 ] ಪಾಠ ಆಗಿದೆ
2. ಪ್ರಣೋದೇವೀ....[ಋಗ್...ಸರಸ್ವತೀ ಸೂಕ್ತದ ಆಯ್ದ ಭಾಗ] ಪಾಠ ಆಗಿದೆ
3. ಶ್ರೀ ಗಣೇಶ ಸೂಕ್ತಮ್ [ಋಗ್.  ಮಂಡಲ-8 ಅಷ್ಟಕ-6  ಸೂಕ್ತ-81] .......ಈಗ ನಡೆಯುತ್ತಿದೆ.

ವೇದ ಪಾಠವನ್ನು ಸರಿಯಾಗಿ ಕಲಿಯಲು ವಾರಕ್ಕೊಂದು ಗಂಟೆ ಏನೇನೂ ಸಾಲದು. ಆದರೆ ವೇದಮಂತ್ರಗಳ ಜೊತೆಗೇ  ವೇದದಲ್ಲಿರುವ ಅನೇಕ ಮಂತ್ರಗಳ ಬಗ್ಗೆ ಆಗಿಂದಾಗ್ಗೆ  ಉಪನ್ಯಾಸಗಳನ್ನು ಯೋಜಿಸುವುದರಿಂದ  ಸ್ವಲ್ಪ ಮಟ್ಟಿಗಾದರೂ ವೇದದ ಅರಿವು ಮೂಡುವುದರಲ್ಲಿ ಸಂದೇಹವಿಲ್ಲ. 
ಇದುವರಗೆ ಕಲಿತಿರುವ ಮಂತ್ರಗಳನ್ನು  ಉಚ್ಚರಿಸುವಾಗ ಆಗುವ ಸ್ವರದಲ್ಲಿನ ದೋಷಗಳನ್ನು ತಿದ್ದಿ  ಸಾಮೂಹಿಕವಾಗಿ ಅಭ್ಯಾಸ ಮಾಡಲು  ನಾವೆಲ್ಲಾ ವೇದ ವಿದ್ಯಾರ್ಥಿಗಳು ಒಂದು ಭಾನುವಾರ 5-6 ಗಂಟೆಗಳ ಕಾಲ ಒಟ್ಟಿಗೆ  ಸೇರಬೇಕೆಂಬ  ಸಲಹೆಯು     ಹಲವರಿಂದ  ಬಂದಿದೆ. ದಿನಾಂಕ 11.11.2012 ಭಾನುವಾರ    ಅಥವಾ ಎಲ್ಲರಿಗೂ ಅನುಕೂಲ ವಾಗುವ ಒಂದು ದಿನ  ಹಾಸನದ ಈಶಾವಾಸ್ಯಮ್ ನಲ್ಲಿ  ಅಥವಾ  ರಾಮನಾಥಪುರ ದಂತಹ ನದೀ ತೀರದಲ್ಲಿ  5-6 ಗಂಟೆಗಳ ಕಾಲ ಒಟ್ಟಿಗೆ ಅಭ್ಯಾಸ ಮಾಡಿದರೆ ಮಂತ್ರ ಪಾಠವನ್ನು ಮುಂದುವರೆಸಿಕೊಂಡು ಹೋಗಲು ಸುಲಭವಾಗುತ್ತದೆ,. ಎಂಬ ಅಭಿಪ್ರಾಯವಿದೆ. ನವಂಬರ್ ನಲ್ಲಾದರೆ ದಿನಾಂಕ  11 ಅಥವಾ 18 , ಡಿಸೆಂಬರ್ ನಲ್ಲಿ ಯಾವುದೇ ಭಾನುವಾರವೂ ಆಗಬಹುದು. ನಿಮ್ಮ  ಸಲಹೆಯನ್ನು vedasudhe@gmail.com ಗೆ  ಮೇಲ್ ಮಾಡಿ. ಹೆಚ್ಚು ಜನರಿಗೆ ಅನುಕೂಲ ವಾಗುವ ಸ್ಥಳ /ದಿನವನ್ನು ಅಂತಿಮವಾಗಿ ನಿರ್ಧರಿಸೋಣ.ಈ ಮೇಲ್ ನಲ್ಲಿ  ಪಾಠವನ್ನು ತರಿಸಿಕೊಳ್ಳುತ್ತಿರುವವರು ಹೀಗಾದರೂ ವರ್ಷಕ್ಕೊಮ್ಮೆ ಅಥವಾ ಎರಡು ಭಾರಿ ಪ್ರತ್ಯಕ್ಷ ಪಾಠದಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲವೇ? 
ಈ ಮೇಲ್ ನಲ್ಲಿ ಯಾರಿಗೆ ಪಾಠ ತಲುಪಿಲ್ಲ ಅವರು  ಮೇಲ್ ಮಾಡಿದರೆ ಪಾಠವನ್ನು ಕಳಿಸಿಕೊಡಲಾಗುತ್ತದೆ. ಪಾಠ ತರಿಸಿಕೊಂಡವರು ಕಲಿಯಿಯುತ್ತಿದ್ದೀರಿ, ತಾನೇ?
ಗಣೇಶ ಸೂಕ್ತಮ್ ಮಂತ್ರ ಪಾಠ ಮುಗಿದ ಮೇಲೆ ಶ್ರೀ ವಿಶ್ವನಾಥ ಶರ್ಮರು ಅರ್ಥವನ್ನು ತಿಳಿಸುವರು.
ನಮಸ್ಕಾರಗಳೊದನೆ
-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ/ವೇದ ಭಾರತೀ
ಮನವಿ:   ಶ್ರೀ ವಿಶ್ವನಾಥ ಕಿಣಿಯವರು  ಡಿಸೆಂಬರ್: 23 ಸೂಕ್ತವೆಂದುತಿಳಿಸಿದ್ದಾರೆ ಉಳಿದವರ  ಅಭಿಪ್ರಾಯವನ್ನು    ತಿಳಿಸಿ vedasudhe@gmail.com ಗೆ ಮೇಲ್ ಮಾಡಬಹುದು. ಅಥವಾ ಮೊಬೈಲ್ ಸಂಖ್ಯೆ 9663572406 ಗೆ ಕರೆಮಾಡಬಹುದು


----------------------------------------------------------------------------

Dear Sir:

I am visiting Bangalore from Canada and have been greatly impressed by what you are doing to promote the vedic traditon. I have been trying to reach/contact sri Sudhakara Sharma and even called Sri Shankara TV to get his contact number in Bangalore. Could you please help me to contact him before I leave for Canada on Nov 16.

Your help will be greatly appreciated
With best wishes
Dr. G. Lakshman

ಕೆನಡಾದಲ್ಲಿರುವ ಡಾ.ಲಕ್ಷ್ಮಣ್ ರವರು ಈಗ   ಬೆಂಗಳೂರಿಗೆ ಬಂದಿದ್ದು ಅವರ ದೂರವಾಣಿ ಮೂಲಕ ಮಾತನಾಡಿ ವೇದಸುಧೆ/ವೇದಭಾರತಿಯ ಕಾರ್ಯವನ್ನು ಮುಕ್ತಕಂಠದಿಂದ ಮೆಚ್ಚಿದರು. ನಮ್ಮ ಶ್ರಮ ಸಾರ್ಥಕವಲ್ಲವೇ? ಹೊರದೇಶದಲ್ಲಿರುವ ಕನ್ನಡಿಗರಿಗಾಗಿ ಹೊರದೇಶದಲ್ಲಿರುವವರ ಸಹಕಾರದೊಡನೆ ಆನ್ ಲೈನ್ ವೇದ ಮಾಠವನ್ನು ಮಾಡುವ ಯೋಜನೆ ವೇದಭಾರತಿಗೆ ಇದೆ. ಇಂದು ಮನದಲ್ಲಿ ಮೂಡಿದ್ದು ನಾಳೆ ಕಾರ್ಯಗತವಾಗುವುದರಲ್ಲಿ ಸಂಶಯವಿಲ್ಲ. ಇದು ನನ್ನ ಅನುಭವ.

-ಹರಿಹರಪುರಶ್ರೀಧರ್
ಸಂಪಾದಕ
ವೇದಭಾರತೀ/ ವೇದಸುಧೆ

ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ




ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.  ಇದೇ ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಸರ್ಕಾರವು ಪಂಡಿತರನ್ನು ಸನ್ಮಾನಿಸಲಿದೆ. 116 ವರ್ಷ ವಯೋವೃದ್ಧರಾದ        ಚತುರ್ವೇದಿಗಳು ಒಂದು ನೂರುವರ್ಷಗಳಿಂದ ನಾಲ್ಕೂ ವೇದಗಳನ್ನು ಅಭ್ಯಾಸಮಾಡುತ್ತಿದ್ದಾರೆಂಬುದು ಅತ್ಯಂತ ಸಂತಸದ ಮತ್ತು ಆಶ್ಚರ್ಯದ ಸಂಗತಿಯೂ ಹೌದು. ವೇದಸುಧೆಯು ಪಂಡಿತರಿಗೆ ಸಾಸ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತದೆ.

-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ/ಬೇದಭಾರತೀ



Tuesday 30 October 2012

ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ ವೇದಾಧ್ಯಾಯೀ ಸುಧಾಕರ ಶರ್ಮ

ಶ್ರೀ ಎಸ್.ಎಲ್.ಎನ್. ಸ್ವಾಮಿಯವರು ವೇದಾಧ್ಯಾಯೀ ಸುಧಾಕರ ಶರ್ಮರೊಡನೆ ನಡೆಸಿದ ಸಂದರ್ಶನವು ಶ್ರೀ ಶಂಕರ ಟಿ.ವಿ. ಛಾನಲ್ ನಲ್ಲಿ   ಕೆಲವು ತಿಂಗಳ ಹಿಂದೆ ಪ್ರಕಟವಾಗಿತ್ತು.  ಒಂದು ಗಂಟೆಗಳ ಕಾಲ ಪ್ರದರ್ಶನವಾಯ್ತು. ವೇದದ ವಿಚಾರದಲ್ಲಿ ಜಿಜ್ಞಾಸುಗಳಿಗೆ ಇರಬಹುದಾದ ಹಲವಾರು ಅನುಮಾನಗಳನ್ನು ಬಿಡಿಬಿಡಿಯಾಗಿ ಬಹಳ ಸ್ಪಷ್ಟ ನುಡಿಗಳಲ್ಲಿ ವಿವರಿಸುತ್ತಾ ಶ್ರೀ ಶರ್ಮರ ಸಂದರ್ಶನವು ಸಾಗಿತ್ತು. ವೇದಸುಧೆಯಲ್ಲಿ ಕೆಲವು ಗಂಟೆಗಳ ಮುಂಚೆ ಈ ಕಾರ್ಯಕ್ರಮದ ಬಗ್ಗೆ ಪ್ರಕಟಿಸಲಾಗಿತ್ತು. ಅದರ ಮೂಲಕ ಸುದ್ಧಿ ತಿಳಿದ ಅನೇಕರು ಕಾರ್ಯಕ್ರಮದ ಪ್ರಸಾರಸಮಯದಲ್ಲಿಯೇ ತಮ್ಮ ಸ್ನೇಹಿತರುಗಳಿಗೆ ಮೊಬೈಲ್ ಮೂಲಕ ಸುದ್ಧಿ ತಲುಪಿಸಿ ಈ ಕಾರ್ಯಕ್ರಮವನ್ನು ನೋಡಲು ಕಾರಣರಾದರು. ಈ ಸಂದರ್ಶನದ ಆಡಿಯೋ ವನ್ನು ವೇದಸುಧೆಯ ಅಭಿಮಾನಿಗಳಿಗಾಗಿ ಇಲ್ಲಿ ಪ್ರಕಟಿಸಲಾಗಿದೆ. ಸಾವಕಾಶವಾಗಿ ಕೇಳಿ ನಿಮ್ಮ ಅನಿಸಿಕೆಗಳನ್ನು ವೇದಭಾರತಿಗೆ ಬರೆಯುವುದನ್ನು ಮರೆಯದಿರಿ.ಕೃಪೆ: ಶ್ರೀ ಶಂಕರ ಟಿ.ವಿ. ಚಾನಲ್



Monday 29 October 2012

ವೇದ ಪಾಠ-8












ಈ ಮೇಲ್ ಮೂಲಕ ಪಾಠವನ್ನು ತರಿಸಿಕೊಳ್ಳುವವರಿಗೆಲ್ಲರಿಗೂ ಇಂದು  ಮೇಲ್ ಮಾಡಲಾಗಿದೆ. ತಲುಪದಿದ್ದವರು  ತಿಳಿಸಿದರೆ ಕೂಡಲೇ ಮೇಲ್ ಮಾಡುವೆ.
-ಹರಿಹರಪುರಶ್ರೀಧರ್
ಸಂಪಾದಕ, ವೇದಸುಧೆ

  

Tuesday 2 October 2012

ಮಾಧ್ಯಮ-ಸಂವಾದ

ಹಾಸನ ಜನತೆಗೆ  ವೇದಾಧ್ಯಾಯೀ  ಶ್ರೀ ಸುಧಾಕರಶರ್ಮರ ಪರಿಚಯವಾಗಿ ನಾಲ್ಕೈದು ವರ್ಷವಾಯ್ತು. ಹಾಸನದ ಶ್ರೀ ಶಂಕರ ಮಠದಲ್ಲಿ ಅವರ ನಾಲ್ಕಾರು ಉಪನ್ಯಾಸಗಳು ನಡೆದಿದ್ದು   ಈಗ್ಗೆ ಎರಡು ವರ್ಷಗಳ ಹಿಂದೆ     "ವೇದಸುಧೆ"ಯ ವಾರ್ಷಿಕೋತ್ಸವದಲ್ಲಿ ಅವರ ಉಪನ್ಯಾಸಗಳ ಸಿಡಿ. "ನಿಜವ ತಿಳಿಯೋಣ" ಬಿಡುಗಡೆಯಾಗಿತ್ತು. ಆ ನಂತರ ಶ್ರೀಯುತರ ಅನಾರೋಗ್ಯದಿಂದಾಗಿ ಹಾಸನಕ್ಕೆ ಅವರನ್ನು ಮತ್ತೆ ಕರೆಸಲಾಗಿರಲಿಲ್ಲ.ಹಾಸನದ ಜನತೆಗೆ ಶ್ರೀಯುತರ ಮಾತು ಕೇಳುವ ಕಾತುರತೆ ಇತ್ತು. ಅದಕ್ಕೆ ಅವಕಾಶವೂ ಒದಗಿಬಂತು. ಪ್ರವಾಸ ಮಾಡುವಷ್ಟು ಅವರ ಆರೋಗ್ಯ ಸುಧಾರಿಸದಿದ್ದರೂ ಹಾಸನದ ಜನತೆಯ ಮೇಲಿನ ಪ್ರೀತಿ ಮತ್ತು ವೇದ ಪ್ರಚಾರ ಮಾಡುವ ಅವರ ದೃಢ ನಿಲುವು ಅವರನ್ನು ಹಾಸನಕ್ಕೆ ಬರುವಂತೆ ಮಾಡಿತು. ದಿನಾಂಕ 29.09.2012 ಶನಿವಾರ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಭವನದಲ್ಲಿ ಶ್ರೀಯುತರೊಡನೆ ಮಾಧ್ಯಮ-ಸಂವಾದ ನಡೆಯಿತು. ಮುಕ್ತವಾತಾವರಣದಲ್ಲಿ ಅತ್ಯಂತ ಸಂಬ್ರಮದಿಂದ  ನಡೆದ  ಸಂವಾದದ ಆಡಿಯೋ ಇಲ್ಲಿದೆ. ವಿಚಾರ ಮಾಡುವಂತಹ ಎಲ್ಲರೂ ಅತ್ಯಗತ್ಯವಾಗಿ ಕೇಳಲೇ  ಬೇಕಾದ ಮಾತುಗಳು. ಎಲ್ಲವೂ  2-3 ನಿಮಿಷಗಳ ಆಡಿಯೋ ಕ್ಲಿಪ್ ಗಳು. ಕೇಳಿ ,ನಿಮ್ಮ ಅಭಿಪ್ರಾಯ ತಿಳಿಸಿ.



ವೇದಾಧ್ಯಾಯೀ ಶ್ರೀ ಸುಧಾಕರಶರ್ಮರ ಪ್ರಾಸ್ತಾವಿಕ ನುಡಿ:

 ಪ್ರಶ್ನೆ-1 ಅಪಾತ್ರರಿಗೆ ವೇದವನ್ನು ಕಲಿಸಬಾರದು, ಅಂತಾರಲ್ಲಾ?

  ಪ್ರಶ್ನೆ-2 ವೇದಾಧ್ಯನ ಮಾಡಲು ಆಹಾರ ಮತ್ತು ವಸ್ತ್ರ ಸಂಹಿತೆ ಇದೆಯೇ?

ಪ್ರಶ್ನೆ-3 ವೇದ ಎಂದರೆ ಏನು?
 

ಪ್ರಶ್ನೆ-4 ಸ್ಮೃತಿಗಳ ಬಗ್ಗೆ ಏನು ಹೇಳುವಿರಿ?

ಪ್ರಶ್ನೆ-5 ನಮ್ಮ ಸಂಪ್ರದಾಯಗಳು ನಮ್ಮ ಸಮಾಜದಲ್ಲಿ ಸಮಸ್ಯೆಗಳಿಗೆ ಕಾರಣವಾಗಿವೆಯೇ?


ಪ್ರಶ್ನೆ-6 ವೇದಾಭ್ಯಾಸವನ್ನು ಮಾಡಲು
ಉಪನಯನ ಸಂಸ್ಕಾರ ಆಗಿರಲೇ ಬೇಕೇ?



ಪ್ರಶ್ನೆ-7 ವೇದಗಳನ್ನು ಪರಮಪ್ರಮಾಣ ಎಂದು ಹೇಗೆ ಹೇಳುವಿರಿ?

ಪ್ರಶ್ನೆ-8 ಜಾತಿ ಪದ್ದತಿ ಹೇಗೆ ಬೆಳೆದು ಬಂತು?

 ಪ್ರಶ್ನೆ-9 ವೇದದ ದೃಷ್ಟಿಯಲ್ಲಿ ಶಿಕ್ಷಣ ಅಂದರೆ.....?