ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Wednesday 8 July 2015

ವೇದಸುಧೆ: ವೇದಭಾರತೀ ಸತ್ಸಂಗದಲ್ಲಿ ನಡೆಯುತ್ತಿರುವ ವೇದಪಾಠದ ಒಂದು ಕ್ಲ...







ಹಾಸನದ ವೇದಭಾರತಿಯು ನಡೆಸುವ ನಿತ್ಯ ಸತ್ಸಂಗವು ಹಲವರನ್ನು ಹತ್ತಿರ ತಂದಿದೆ. ಅಂತವರಲ್ಲಿ ನಿನ್ನೆ ಬಂದು ತಮ್ಮ ಮೆಚ್ಚುಗೆ ವ್ಯಕ್ತಪಟಿಸಿದ ನಿವೃತ್ತ  ಅಧೀಕ್ಷಕ ಇಂಜಿನಿಯರ್ [KUWSS] ಶ್ರೀ ರಂಗಸ್ವಾಮಿಯವರು. ಅವರು ಬೆಳಗಾಮ್ ನಿಂದ ತಮ್ಮ ತಂಗಿಮನೆಗೆ ಬಂದಿದ್ದರು. ನಮ್ಮ ಚಟುವಟಿಗೆ ಅವರಿಗೆ ಎಷ್ಟು ಇಷ್ಟವಾಯಿತೆಂದರೆ ನಮ್ಮನ್ನು ಬೆಳಗಾಮ್ ಗೆ ಆಹ್ವಾನಿಸಿದ್ದಾರೆ. ಅಲ್ಲೊಂದು ಅಗ್ನಿಹೋತ್ರ ಶಿಬಿರ ನಡೆಯಲಿದೆ. ಅಷ್ಟಕ್ಕೆ ಸುಮ್ಮನಾಗಲಿಲ್ಲ. ಅವರ ಮಿತ್ರರಾದ ಕೆ.ಆರ್.ನಗರದ ಡಾ|| ಶಿವಲಿಂಗಪ್ಪನವರಿಗೆ ಕರೆಮಾಡಿ ಅವರನ್ನು ಪರಿಚಯ ಮಾಡಿಸಿ ಕೆ.ಆರ್.ನಗರದಲ್ಲಿ ಅವರು ನಡೆಸುವ ಯೋಗ ತರಬೇತಿ ಶಿರದಲ್ಲಿ ಅಗ್ನಿಹೋತ್ರ ನಡೆಸಿಕೊಡಲು ಆಹ್ವಾನಿಸಿದ್ದಾರೆ. ಇಂದು ಅವರ ತಂಗಿಯಮನೆಯಲ್ಲೇ ಅಗ್ನಿಹೋತ್ರ ಏರ್ಪಡಿಸಿ ಸ್ವತಃ ಮಾಡಿ ಸಂತೋಷಪಟ್ಟರು.

ಹೌದು, ನಮ್ಮ ಸತ್ಸಂಗ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ನಮ್ಮ ಕೈಲಾದಷ್ಟು ಸ್ಥಳಗಳಿಗೆ ಈ ವಿಚಾರವನ್ನು ತಲುಪಿಸಿಸುವ ಕೆಲಸವನ್ನು ಮಾಡಲು ನಾವೂ ಕಟಿಬದ್ಧರಾಗಿದ್ದೇವೆ.

No comments:

Post a Comment