ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.
Showing posts with label ಸಂಪಾದಕೀಯ. Show all posts
Showing posts with label ಸಂಪಾದಕೀಯ. Show all posts

Sunday, 31 August 2014

ವೇದದ ಚಿಂತನೆ ಎಂದರೆ ಅಂದಿಗೂ. ಇಂದಿಗೂ , ಎಂದೆಂದಿಗೂ ಹೊಂದುವ ವಾಸ್ತವ ಸತ್ಯಗಳು

         ಯಾರೊಬ್ಬರ ಖಾಸಗೀ ಬದುಕಿನಲ್ಲೂ ಯಾರೂ  ಮುಖತೂರಿಸುವಂತಿಲ್ಲ. ಅವರವರ ಬದುಕು ಅವರವರ ಚಿಂತನೆಯಂತೆ ಸಾಗುತ್ತದೆ.ಅದು ಅವರ ಸ್ವಾತಂತ್ರ್ಯ. ಆದರೆ ವೇದದ ವಿಚಾರ ಮಾತಾಡುವಾಗ ಯಾರ ಸ್ವಾತಂತ್ರ್ಯಕ್ಕೂ ಧಕ್ಕೆ ಮಾಡುವುದಕ್ಕಲ್ಲ, ಬದಲಿಗೆ ಜೀವನದ ಉತ್ಕೃಷ್ಟಯ  ಬಗ್ಗೆ ಅರಿವು ಹೆಚ್ಚಾಗಲು ಬಾಗಿಲು ತೆರೆದುಕೊಳ್ಳುವ ಅವಕಾಶ. ನಮ್ಮ ಆತ್ಮೋನ್ನತಿಗೆ ಅವಕಾಶ ಲಭ್ಯವಾಗುತ್ತದೆ. ಆದ್ದರಿಂದ ವೇದದ ವಿಚಾರ ಬಂದಾಗ ಅದು ಉತ್ತಮವಾದ ಜೀವನಕ್ಕೆ   ನೆರವು ನೀಡುವ ಜ್ಞಾನವೇ ಹೊರತೂ ಎಲ್ಲಾ ಪದ್ದತಿಗಳಂತೆ     ಅದೊಂದು ಪದ್ದತಿಯೆಂದು ಭಾವಿಸುವ ಅಗತ್ಯವಿಲ್ಲ. 

         ಸಾವಿರಾರು ವರ್ಷಗಳು ನಾವು ದಾಸ್ಯಕ್ಕೊಳಗಾಗಿದ್ದೆವು. ಆ ಸಂದರ್ಭದಲ್ಲಿ ವೈದಿಕ ಮಾರ್ಗವು     ಕ್ರಮೇಣ  ನಶಿಸಿ ಈಗಿರುವ ಎಡಬಿಡಂಗಿ ಹಂತವನ್ನು ತಲುಪಿದ್ದಾಗಿದೆ. ವೇದವನ್ನು ಬಿಡಲಾರೆವು. ಆಚರಣೆಯಲ್ಲಿರುವ ಸಂಪ್ರದಾಯ ಬಿಡಲಾರೆವು.ಎಲ್ಲವನ್ನೂ ಸೇರಿಸಿ " ನಮ್ಮ ವೇದ, ಪುರಾಣ, ಸಂಪ್ರದಾಯ" ಎಲ್ಲಾ ಪದವನ್ನೂ  ಒಂದೇ ತಕ್ಕಡಿಯಲ್ಲಿ ತೂಗಿನೋಡುವ ಪ್ರಯತ್ನವನ್ನು ಮಾಡುತ್ತೇವೆ. ವೇದವನ್ನು ಸರಳವಾಗಿ  ಅರ್ಥೈಸಲು ಪುರಾಣದ ಕಥೆಗಳನ್ನು ಬರೆದೆವು. ಅವುಗಳಲ್ಲಿ ಇಂದಿಗೆ ಎಷ್ಟು ಬೇಕು, ಎಷ್ಟು ಬೇಡ ಎಂಬುದು ಗೊತ್ತಾಗದೇ ಸಂಶಯಗ್ರಸ್ತರಾಗಿ ಉಳಿದೆವು.    ಆದರೆ ವೇದದ ಚಿಂತನೆ ಎಂದರೆ ಅಂದಿಗೂ.   ಇಂದಿಗೂ , ಎಂದೆಂದಿಗೂ ಹೊಂದುವ ವಾಸ್ತವ ಸತ್ಯಗಳು.ಅವು ಕಟ್ಟು ಕಥೆಗಳಲ್ಲ. ಬೆಂಕಿಯು ಯಾವ ಕಾಲದಲ್ಲೂ, ಯಾವ ಪ್ರದೇಶದಲ್ಲೂ ಹಾಗೂ ಯಾರೂ ಮುಟ್ಟಿದರೆ ಸುಡುತ್ತದೆಂಬುದು ಎಷ್ಟು ಸತ್ಯವೋ   ವೇದವು  ಅಷ್ಟು ಸತ್ಯ. ಅಷ್ಟು ವೈಜ್ಞಾನಿಕ. 
                 ಆದರೆ  ಯಾವುದೋ ಕಾಲದಲ್ಲಿ ಅದರಲ್ಲೂ ಮೂಗು ತೂರಿವುವ ಪ್ರಯತ್ನಮಾಡಿ ವೇದವನ್ನು ಸರಿಯಾಗಿ ಅರ್ಥೈಸದೆ ಹೇಗೆ ಬೇಕೋ ಹಾಗೆ ವ್ಯಾಖ್ಯಾನಿಸಿದ್ದರ ಪರಿಣಾಮ ಈಗಿನ ಹಲವು ಆಪಾದನೆಗಳು ವೇದದ ಮೇಲೆ. ಆದರೆ  ವೇದವನ್ನು  ಯಾಸ್ಕರ  ನಿರುಕ್ತದ ಆಧಾರದಲ್ಲಿ ಅರ್ಥೈಸಿದ್ದೇ ಆದರೆ ವೇದವು ನಮ್ಮ ಜೀವನವನ್ನು ಉನ್ನತಿಗೆ ಏರಿಸಬಲ್ಲದು. ಅಲ್ಲದೆ     ಮಾನವೀಯತೆಗೆ  ವಿರುದ್ಧವಾದ ಯಾವ ಅಂಶವೂ ವೇದದಲ್ಲಿ ಸಿಗಲಾರದು.

          ಆದ್ದರಿಂದ ನಮ್ಮ ಸಂಪ್ರದಾಯಗಳು ಏನೇ ಇರಲಿ.  ವೇದದ ಆಧಾರದಲ್ಲಿ ಅದರಲ್ಲಿ ಸತ್ಯವನ್ನು ಕಾಣುವ ಪ್ರಯತ್ನ ಮಾಡಿದಾಗ  ಅಸತ್ಯವಾದ ಸಂಗತಿಗಳು, ಮಾನವೀಯ ವಿರೋಧಿ ಆಚರಣೆಗಳು ತಾನೇ ತಾನಾಗಿ ದೂರವಾಗುವುದರಲ್ಲಿ ಸಂದೇಹವಿಲ್ಲ.  ಹಲವಾರು ವರ್ಷಗಳು ಶ್ರೀ ಸುಧಾಕರಶರ್ಮರ ವಾದವನ್ನು ಒಪ್ಪದೆ ಚರ್ಚೆ ಮಾಡಿದಮೇಲೆ ನನಗಂತೂ ವೇದವಲ್ಲದೆ ಬೇರೆ ದಾರಿ ಕಾಣುತ್ತಿಲ್ಲ. ವೇದವು ನನಗೆ  ನಿರ್ಭಯತೆಯನ್ನು ನೀಡಿರುವುದರಲ್ಲಿ ಎರಡು ಮಾತಿಲ್ಲ. ಮನುಷ್ಯರಿಗೆ ದೇವರಲ್ಲಿ ಭಯ ಇರಬಾರದು.ಭಯವು ಮೌಢ್ಯಕ್ಕೆ ಎಡೆಮಾಡಿಕೊಡುತ್ತದೆ. ವೇದದ     ಬೆಳಕಿನಲ್ಲಿ  ನಮ್ಮ ಚಿಂತನೆಗಳು ಆರಂಭವಾದರೆ ನಿರ್ಭಯತೆ ,ಸ್ಪಷ್ಟತೆ ತಾನಾಗಿ ಲಭ್ಯವಾಗುತ್ತದೆ.

Wednesday, 12 December 2012

ಅಂತರ್ಜಾಲದ ಮೂಲಕ ವೇದಪಾಠ

ವೇದಪಾಠವನ್ನು ಅಂತರ್ಜಾಲದ ಮೂಲಕ ಆರಂಭ ಮಾಡಿದ್ದೇನೋ ಆಯ್ತು. ಪ್ರಾರಂಭದ ದಿನಗಳಲ್ಲಿ ಕೆಲವರು ಸ್ಪಂಧಿಸಿ ನಮಗೆ ಫೀಡ್ ಬ್ಯಾಕ್ ಕೊಡುತ್ತಿದ್ದರು.ಆದರೆ ಬರುಬರುತ್ತಾ [ಪಾಠವು ನಿಧಾನಗತಿಯಲ್ಲಿ ಸಾಗಿದ್ದುದರ ಪರಿಣಾಮ ಇರಬಹುದು] ಫೀಡ್ ಬ್ಯಾಕ್ ಬರುವುದು ಕ್ರಮೇಣ ನಿಂತು ನನಗೆ ಅನುಮಾನ ಶುರುವಾಯ್ತು. ಆಸಕ್ತಿ ಇಲ್ಲದವರಿಗೆ ನಾನು ಕಳಿಸುತ್ತಿದ್ದೀನೇನೋ ಆಡಿಯೋ ಸಿದ್ಧಪಡಿಸಲು ವೃಥಾ ಶ್ರಮ ಪಟ್ಟು   ಅದು ಯಾರಿಗೂ ಪ್ರಯೋಜನ ವಾಗದಿದ್ದಾಗ ಸುಮ್ಮನೆ ಏಕೆ ಕಷ್ಟ? ಸುಮ್ಮನಾಗಿ ಬಿಡಲೇ ಎಂಬ ಭಾವನೆ ಬಾರದೆ ಇಲ್ಲ. ಆದರೆ ಅಂತಾ ಸಂದರ್ಭಗಳಲ್ಲಿ ನನ್ನ ಸಮಾಧಾನಕ್ಕಾಗಿ ಒಂದು ಮೇಲ್ ಬಂದು ಬಿಡುತ್ತೆ. ಅಷ್ಟಾದರೂ ಸಾಕು. ಒಬ್ಬರಿಗೆ ಪ್ರಯೋಜನ ವಾದರೂ ನನ್ನ ಕೆಲಸ ನಾನು ಮಾಡುವೆ. ನನ್ನ ಮೇಲ್ ಗೆ ಸ್ಪಂಧಿಸಿದ ಶ್ರೀ ಸುನಿಲ್ ಕೇಳ್ಕರ್ ಅವರ ರಿಪ್ಲೆ ನಮ್ಮ ಓದುಗರ ಗಮನಕ್ಕಾಗಿ ಇಲ್ಲಿ ಪ್ರಕಟಿಸಿರುವೆ.
Sunil Kelkar
13:18 (45 minutes ago)

to me
Respected Sir,

Pls. do not stop sending vedapatha.

Since I have mapped my personal mail box [snkelkar1@gmail.com] with my office mail id , a copy of everything coming to my gmail is forwarded as a copy to my official mail id. There attachments like mp3,mp4,bmp,etc are removed.

I do get info from gmail account. Hence pls do not stop sending info.

Thanks & Regards,

Sunil Kelkar

Thursday, 1 November 2012

ಕಲ್ಯಾಣಮಾರ್ಗದಲ್ಲಿ ನಿಮ್ಮ ಜೀವನ ರಥ ಸಾಗಲಿ…..


ವೇದಮಂತ್ರಗಳ ಅರ್ಥ ತಿಳಿಯುತ್ತಾ ಹೋದಂತೆ ಮನಸ್ಸು ಮುದಗೊಳ್ಳುತ್ತದೆ,ಜೊತೆಯಲ್ಲೇ ಇಂತಾ ಜ್ಞಾನದ  ಸರಿಯಾದ ಪ್ರಚಾರ ಪ್ರಸಾರ ಆಗಲಿಲ್ಲವಲ್ಲಾ!  ಎಂಬ ಬಗ್ಗೆ ಮನಸ್ಸು ಚಿಂತೆಗೀಡಾಗುತ್ತದೆ.ಕಾರಣ ಏನಾದರೇನು, ಇನ್ನೂ ಅಳಿಯದೆ ಉಳಿದಿದೆಯಲ್ಲಾ!! ಅದೇ ಸಮಾಧಾನ. ವೇದ ಮಂತ್ರವನ್ನು ಕಲಿಸುತ್ತಿರುವ ವೇದ ವಿದ್ವಾಂಸರು ಮಂತ್ರಗಳ ಅರ್ಥವನ್ನೂ ತಿಳಿಸುತ್ತಾ ಅರ್ಥಾನುಸಂಧಾನ ಮಾಡಿಸುತ್ತಾ ವೇದಪಾಠವನ್ನು ಮಾಡಿದಾಗ  ಕಲಿಯುತ್ತಿರುವ ವಿದ್ಯಾರ್ಥಿಯು  ಸಮಾಜಾಭಿಮುಖವಾಗಿ ಬೆಳೆಯಲು ಅವಕಾಶವಾಗುತ್ತದೆ.

ಇಂದಿನ ವೇದ ಮಂತ್ರದ ಬಗ್ಗೆ ಸ್ವಲ್ಪ ವಿಮರ್ಶೆ ಮಾಡೋಣ.
ಋಗ್ವೇದ ಮಂಡಲ: 5    ಸೂಕ್ತ: 55    ಮಂತ್ರ: 8

ಯತ್ ಪೂರ್ವ್ಯಂ  ಮರುತೋ ಯಚ್ಚ ನೂತನಂ ಯದುದ್ಯತೇ
ವಸವೋ ಯಚ್ಚ ಶಸ್ಯತೇ|
ವಿಶ್ವಸ್ಯ ತಸ್ಯ ಭವಥಾ ನವೇದಸ:
ಶುಭಂ ಯಾತಾಮನು ರಥಾ ಅವೃತ್ಸತಾ||

ಮರುತ:= ಸತ್ಯಕ್ಕಾಗಿ ಪ್ರಾಣ ನೀಡಲು ಸಿದ್ಧರಿರುವ ಧೀರರೇ
ವಸವ:= ಮಾನವರೇ
ನವೇದಸ:= ನೀವು ವಿದ್ಯಾರಹಿತರಾಗಿದ್ದೀರಿ
ಯತ್ ಪೂರ್ವ್ಯಂ  = ಯಾವುದು ಪ್ರಾಚೀನವೋ    ಚ= ಮತ್ತು
ಯತ್ ನೂತನಂ= ಯಾವುದು ನೂತನವೋ
ಯತ್ ಉದ್ಯತೇ= ಯಾವುದು ನಿಮ್ಮ ಅಂತ:ಕರಣದಿಂದ ಉದ್ಭವಿಸುತ್ತದೋ
ಚ = ಮತ್ತು 
ಯತ್ ಶಸ್ಯತೇ = ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ
ತಸ್ಯ ವಿಶ್ವಸ್ಯ ಭವಥ = ಅಂತಹ ಎಲ್ಲದಕ್ಕೂ ಕಿವಿಗೊಡಿ
ಶುಭಂ  ಯಾತಾಂ  ಅನು = ಕಲ್ಯಾಣ ಮಾರ್ಗದಲ್ಲಿ ನಡೆವವರ ಹಿಂದೆ
ರಥಾ:  ಅವೃತ್ಸತ = ನಿಮ್ಮ ಜೀವನ ರಥಗಳು ತೆರಳಲಿ

ಮನುಷ್ಯನು ಸುಖವಾಗಿ ನೆಮ್ಮದಿಯಿಂದ ಸುಂದರ ಬದುಕನ್ನು ಹೊಂದಬೇಕಾದರೆ ಯಾವ ಮಾರ್ಗದಲ್ಲಿ ಹೋಗಬೇಕೆಂಬುದನ್ನು ಈ ವೇದಮಂತ್ರವು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಡುತ್ತದೆ. ಮಂತ್ರದ ಭಾವಾರ್ಥ ನೋಡಿ…

ಹೇ ಮನುಜರೇ, ನೀವು ವಿದ್ಯಾರಹಿತರಾಗಿದ್ದೀರಿ[ ವಿದ್ಯೆ ಅವಿದ್ಯೆ ಯ ಅರ್ಥವನ್ನು ಮುಂದಿನ ದಿನಗಳಲ್ಲಿ ನೋಡೋಣ] ನಿಮ್ಮ ಬದುಕು ಹೇಗೆ ಸಾಗಿದರೆ ಸುಂದರವಾಗಬಲ್ಲದೆಂಬುದಕ್ಕೆ ಈ ಕೆಲವು ವಿಚಾರಗಳನ್ನು ಗಮನವಿಟ್ಟು ಕೇಳಿ….
ಯಾವುದು ಪ್ರಾಚೀನವೋ ಮತ್ತು ಯಾವುದು ನೂತನವೋ?, ಯಾವುದು  ನಿಮ್ಮ ಅಂತ:ಕರಣದಿಂದ ಉದ್ಭವಿಸುವುದೋ, ಹಾಗೂ   ಯಾವುದು ಶಾಸ್ತ್ರರೂಪದಲ್ಲಿ ಉಪದೇಶಿಸಲ್ಪಡುತ್ತದೋ ಎಲ್ಲಕ್ಕೂ ಕಿವಿಗೊಡಿ….ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ನಡೆಸುತ್ತದೋ ಅದರ ಹಿಂದೆ ನಿಮ್ಮ ಜೀವನ ರಥಗಳು ಸಾಗಲಿ…..
ವೇದದ ಈ ಕರೆ ಯಾರಿಗೆ ಬೇಡ ?  ಯಾವ ಕಾಲಕ್ಕೆ ಬೇಡ ?  ಯಾವ ದೇಶಕ್ಕೆ ಬೇಡ? .. ಯಾವುದೇ ಮತ ಗ್ರಂಥಗಳು ಕೊಡುವ ಕರೆಗೂ ವೇದದ ಕರೆಗೂ ತುಲನೆ ಮಾಡುವುದು ಕಷ್ಟವೇನಲ್ಲಾ! ಅಲ್ಲವೇ?  ಈ ಮಾರ್ಗದಲ್ಲಿ ಹೋದರೆ ಮಾತ್ರ ನಿನಗೆ ಮುಕ್ತಿ!! ಎಂದು ವೇದವು ಕರೆ ಕೊಡಲಿಲ್ಲವೆಂಬುದನ್ನು ವಿಚಾರವಂತರು ಗಮನಿಸಬೇಕು. ಅಲ್ಲವೇ?

Wednesday, 31 October 2012

ವಿಶೇಷ ಮಂತ್ರಾಭ್ಯಾಸ


ಆತ್ಮೀಯ ವೇದಾಭಿಮಾನಿಗಳಲ್ಲಿ ನಮಸ್ಕಾರಗಳು.

             ಕಳೆದ ಆಗಸ್ಟ್ 19 ರಂದು ಆರಂಭವಾದ "ಎಲ್ಲರಿಗಾಗಿ ಸಾಪ್ತಾಹಿಕ ವೇದ ಪಾಠವು"  ಯಶಸ್ವಿಯಾಗಿ ನಡೆಯುತ್ತಿದ್ದು ಪ್ರತ್ಯಕ್ಷವಾಗಿ ಸುಮಾರು 40 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರೆ, ವೆಬ್ ಸೈಟ್ ಮೂಲಕ ಹಲವರು ಮತ್ತು ಸುಮಾರು 40 ವಿದ್ಯಾರ್ಥಿಗಳು ಈ ಮೇಲ್ ಮೂಲಕ ಪಾಠವನ್ನು ತರಿಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಮತ್ತು ಚನ್ನರಾಯಪಟ್ಟಣದ ವೇದಾಧ್ಯಾಯೀ ಶ್ರೀ ಪ್ರಸಾದ್ ಅವರು ಪಾಠವನ್ನು ಮಾಡುತ್ತಿದ್ದಾರೆ. ಇದುವರೆವಿಗೆ ...
1. ವಿಶ್ವಾನಿ ದೇವ  [ ಯಜು.30.3 ] ಪಾಠ ಆಗಿದೆ
2. ಪ್ರಣೋದೇವೀ....[ಋಗ್...ಸರಸ್ವತೀ ಸೂಕ್ತದ ಆಯ್ದ ಭಾಗ] ಪಾಠ ಆಗಿದೆ
3. ಶ್ರೀ ಗಣೇಶ ಸೂಕ್ತಮ್ [ಋಗ್.  ಮಂಡಲ-8 ಅಷ್ಟಕ-6  ಸೂಕ್ತ-81] .......ಈಗ ನಡೆಯುತ್ತಿದೆ.

ವೇದ ಪಾಠವನ್ನು ಸರಿಯಾಗಿ ಕಲಿಯಲು ವಾರಕ್ಕೊಂದು ಗಂಟೆ ಏನೇನೂ ಸಾಲದು. ಆದರೆ ವೇದಮಂತ್ರಗಳ ಜೊತೆಗೇ  ವೇದದಲ್ಲಿರುವ ಅನೇಕ ಮಂತ್ರಗಳ ಬಗ್ಗೆ ಆಗಿಂದಾಗ್ಗೆ  ಉಪನ್ಯಾಸಗಳನ್ನು ಯೋಜಿಸುವುದರಿಂದ  ಸ್ವಲ್ಪ ಮಟ್ಟಿಗಾದರೂ ವೇದದ ಅರಿವು ಮೂಡುವುದರಲ್ಲಿ ಸಂದೇಹವಿಲ್ಲ. 
ಇದುವರಗೆ ಕಲಿತಿರುವ ಮಂತ್ರಗಳನ್ನು  ಉಚ್ಚರಿಸುವಾಗ ಆಗುವ ಸ್ವರದಲ್ಲಿನ ದೋಷಗಳನ್ನು ತಿದ್ದಿ  ಸಾಮೂಹಿಕವಾಗಿ ಅಭ್ಯಾಸ ಮಾಡಲು  ನಾವೆಲ್ಲಾ ವೇದ ವಿದ್ಯಾರ್ಥಿಗಳು ಒಂದು ಭಾನುವಾರ 5-6 ಗಂಟೆಗಳ ಕಾಲ ಒಟ್ಟಿಗೆ  ಸೇರಬೇಕೆಂಬ  ಸಲಹೆಯು     ಹಲವರಿಂದ  ಬಂದಿದೆ. ದಿನಾಂಕ 11.11.2012 ಭಾನುವಾರ    ಅಥವಾ ಎಲ್ಲರಿಗೂ ಅನುಕೂಲ ವಾಗುವ ಒಂದು ದಿನ  ಹಾಸನದ ಈಶಾವಾಸ್ಯಮ್ ನಲ್ಲಿ  ಅಥವಾ  ರಾಮನಾಥಪುರ ದಂತಹ ನದೀ ತೀರದಲ್ಲಿ  5-6 ಗಂಟೆಗಳ ಕಾಲ ಒಟ್ಟಿಗೆ ಅಭ್ಯಾಸ ಮಾಡಿದರೆ ಮಂತ್ರ ಪಾಠವನ್ನು ಮುಂದುವರೆಸಿಕೊಂಡು ಹೋಗಲು ಸುಲಭವಾಗುತ್ತದೆ,. ಎಂಬ ಅಭಿಪ್ರಾಯವಿದೆ. ನವಂಬರ್ ನಲ್ಲಾದರೆ ದಿನಾಂಕ  11 ಅಥವಾ 18 , ಡಿಸೆಂಬರ್ ನಲ್ಲಿ ಯಾವುದೇ ಭಾನುವಾರವೂ ಆಗಬಹುದು. ನಿಮ್ಮ  ಸಲಹೆಯನ್ನು vedasudhe@gmail.com ಗೆ  ಮೇಲ್ ಮಾಡಿ. ಹೆಚ್ಚು ಜನರಿಗೆ ಅನುಕೂಲ ವಾಗುವ ಸ್ಥಳ /ದಿನವನ್ನು ಅಂತಿಮವಾಗಿ ನಿರ್ಧರಿಸೋಣ.ಈ ಮೇಲ್ ನಲ್ಲಿ  ಪಾಠವನ್ನು ತರಿಸಿಕೊಳ್ಳುತ್ತಿರುವವರು ಹೀಗಾದರೂ ವರ್ಷಕ್ಕೊಮ್ಮೆ ಅಥವಾ ಎರಡು ಭಾರಿ ಪ್ರತ್ಯಕ್ಷ ಪಾಠದಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲವೇ? 
ಈ ಮೇಲ್ ನಲ್ಲಿ ಯಾರಿಗೆ ಪಾಠ ತಲುಪಿಲ್ಲ ಅವರು  ಮೇಲ್ ಮಾಡಿದರೆ ಪಾಠವನ್ನು ಕಳಿಸಿಕೊಡಲಾಗುತ್ತದೆ. ಪಾಠ ತರಿಸಿಕೊಂಡವರು ಕಲಿಯಿಯುತ್ತಿದ್ದೀರಿ, ತಾನೇ?
ಗಣೇಶ ಸೂಕ್ತಮ್ ಮಂತ್ರ ಪಾಠ ಮುಗಿದ ಮೇಲೆ ಶ್ರೀ ವಿಶ್ವನಾಥ ಶರ್ಮರು ಅರ್ಥವನ್ನು ತಿಳಿಸುವರು.
ನಮಸ್ಕಾರಗಳೊದನೆ
-ಹರಿಹರಪುರ ಶ್ರೀಧರ್
ಸಂಪಾದಕ, ವೇದಸುಧೆ/ವೇದ ಭಾರತೀ
ಮನವಿ:   ಶ್ರೀ ವಿಶ್ವನಾಥ ಕಿಣಿಯವರು  ಡಿಸೆಂಬರ್: 23 ಸೂಕ್ತವೆಂದುತಿಳಿಸಿದ್ದಾರೆ ಉಳಿದವರ  ಅಭಿಪ್ರಾಯವನ್ನು    ತಿಳಿಸಿ vedasudhe@gmail.com ಗೆ ಮೇಲ್ ಮಾಡಬಹುದು. ಅಥವಾ ಮೊಬೈಲ್ ಸಂಖ್ಯೆ 9663572406 ಗೆ ಕರೆಮಾಡಬಹುದು


----------------------------------------------------------------------------

Dear Sir:

I am visiting Bangalore from Canada and have been greatly impressed by what you are doing to promote the vedic traditon. I have been trying to reach/contact sri Sudhakara Sharma and even called Sri Shankara TV to get his contact number in Bangalore. Could you please help me to contact him before I leave for Canada on Nov 16.

Your help will be greatly appreciated
With best wishes
Dr. G. Lakshman

ಕೆನಡಾದಲ್ಲಿರುವ ಡಾ.ಲಕ್ಷ್ಮಣ್ ರವರು ಈಗ   ಬೆಂಗಳೂರಿಗೆ ಬಂದಿದ್ದು ಅವರ ದೂರವಾಣಿ ಮೂಲಕ ಮಾತನಾಡಿ ವೇದಸುಧೆ/ವೇದಭಾರತಿಯ ಕಾರ್ಯವನ್ನು ಮುಕ್ತಕಂಠದಿಂದ ಮೆಚ್ಚಿದರು. ನಮ್ಮ ಶ್ರಮ ಸಾರ್ಥಕವಲ್ಲವೇ? ಹೊರದೇಶದಲ್ಲಿರುವ ಕನ್ನಡಿಗರಿಗಾಗಿ ಹೊರದೇಶದಲ್ಲಿರುವವರ ಸಹಕಾರದೊಡನೆ ಆನ್ ಲೈನ್ ವೇದ ಮಾಠವನ್ನು ಮಾಡುವ ಯೋಜನೆ ವೇದಭಾರತಿಗೆ ಇದೆ. ಇಂದು ಮನದಲ್ಲಿ ಮೂಡಿದ್ದು ನಾಳೆ ಕಾರ್ಯಗತವಾಗುವುದರಲ್ಲಿ ಸಂಶಯವಿಲ್ಲ. ಇದು ನನ್ನ ಅನುಭವ.

-ಹರಿಹರಪುರಶ್ರೀಧರ್
ಸಂಪಾದಕ
ವೇದಭಾರತೀ/ ವೇದಸುಧೆ

Friday, 28 September 2012

ಸಾಪ್ತಾಹಿಕ ವೇದಪಾಠದ ಕೇಂದ್ರ.


ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ನಾಲ್ಕು ವರ್ಷಗಳ ಮುಂಚೆ ಹಾಸನದಲ್ಲಿ ತಮ್ಮ ಸರಳ ಉಪನ್ಯಾಸದ ಮೂಲಕ ನಮ್ಮನ್ನೆಲ್ಲಾ ಕಟ್ಟಿಹಾಕಿದ ಮೇಲೆ  ಸುಮ್ಮನೆ ಕೂರಲಾದೀತೇ?

 ಇದೇ ಆಗಸ್ಟ್ 19 ಭಾನುವಾರ ಆರಂಭವಾದ ಸಾಪ್ತಾಹಿಕ ವೇದ ಪಾಠ 

 ಶ್ರೀ ಸುಧಾಕರಶರ್ಮರೊಡನೆ ನಡೆಯುವ ಮುಕ್ತ ಸಂವಾದ ಕಾರ್ಯಕ್ರಮಕ್ಕಾಗಿ ಗೆಳೆಯರಾದ ವಸಂತ ಕುಮಾರ್ ಡಿಸೈನ್ ಮಾಡಿರುವ  ಚಿತ್ರವು ನೂರಾರು ಜನರನ್ನು ಆಕರ್ಶಿಸಿದೆ.


 "ಈಶಾವಾಸ್ಯಮ್ " ಕಳೆದೆರಡು ತಿಂಗಳುಗಳಿಂದ  "ಎಲ್ಲರಿಗಾಗಿ ವೇದ"  ಸಾಪ್ತಾಹಿಕ ವೇದಪಾಠದ ಕೇಂದ್ರ. 


Saturday, 1 September 2012

ಎಲ್ಲರಿಗಾಗಿ ಸಾಪ್ತಾಹಿಕ ವೇದ ಪಾಠ



ಎಲ್ಲರಿಗಾಗಿ ಸಾಪ್ತಾಹಿಕ ವೇದ ಪಾಠ

ದಿನಾಂಕ 2.09.2012 ಭಾನುವಾರ ಬೆಳಿಗ್ಗೆ 10.30 ಕ್ಕೆ

ಸ್ಥಳ: ಈಶಾವಾಸ್ಯಮ್,ಹೊಯ್ಸಳನಗರ, ಹಾಸನ

ಎಲ್ಲರಿಗೂ  ಮುಕ್ತ ಅವಕಾಶ

ಸ್ನೇಹಿತರೊಡಗೂಡಿ ಬನ್ನಿ

ಹೊಸಬರಿಗೆ   ಹಿಂದಿನ ಪಾಠವನ್ನೂ ಸಹ ಮಾಡಲಾಗುವುದು

ಸಂಪರ್ಕಿಸಲು:    ಹರಿಹರಪುರಶ್ರೀಧರ್- 9663572406
                          ಕವಿ ನಾಗರಾಜ್-      9448501804


                ನೀವು ಹೊರದೇಶದಲ್ಲಿ, ಹೊರ ಊರುಗಳಲ್ಲಿದ್ದೀರಾ? ಚಿಂತೆಯಿಲ್ಲ, ಈ ಮೇಲ್ ಮೂಲಕ ಉಚಿತವಾಗಿ ಪಾಠ ತರಿಸಿಕೊಳ್ಳಲು ವೇದಸುಧೆಗೆ    ಮೇಲ್ ಮಾಡಿ. ಈಗಾಗಲೇ ಸುಮಾರು ಇಪ್ಪತ್ತು ಜನ ವಿದ್ಯಾರ್ಥಿಗಳು ಮೇಲ್ ಮೂಲಕ ಪಾಠಗಳ ನ್ನು ತರಿಸಿಕೊಳ್ಳುತ್ತಿದ್ದಾರೆ. ಸುಮಾರು ಇಪ್ಪತ್ತು ಜನ ವಿದ್ಯಾರ್ಥಿಗಳು ಈ  ತಾಣದ ಮೂಲಕ ವೇದಾಭ್ಯಾಸವನ್ನು ಮಾಡುತ್ತಿದ್ದಾರೆ.ಅಷ್ಟೇಅಲ್ಲ ವೇದ ಪ್ರಸಾರದಲ್ಲಿ ಕೈ ಜೋಡಿಸಲು  ಹಾಸನದ ಸಮೀಪವಿರುವ  ನಿಮ್ಮ  ಪರಿಚಯದವರು/ಬಂಧು ಮಿತ್ರರಿಗೆ ತಿಳಿಸಿ
ನಮ್ಮ ಈ ಮೇಲ್  ವಿಳಾಸಗಳು:
mail@vedasudhe.com [ಪಾಠ ತರಿಸಿಕೊಳ್ಳಲು ಇದು ಸೂಕ್ತ]
vedasudhe@gmail.com


ಮನವಿ: 
ದಿನಾಂಕ 31.8.2012 ರ ವರಗೆ ಕೋರಿಕೆ ಬಂದವರಿಗೆಲ್ಲಾ  ವೇದಪಾಠವನ್ನು  ನಾಲ್ಕು ಭಾಗಗಳಲ್ಲಿ     ಮೇಲ್ ಮಾಡಲಾಗಿದೆ.  ಪಾಠ ತಲುಪಿದವರಿಂದ ಒಂದು ಸಾಲಿನ ಉತ್ತರ ಅಪೇಕ್ಷಿಸುತ್ತೇವೆ. ಇದರಿಂದ ಮುಂದಿನ ಪಾಠವನ್ನು ಕಳಿಸಲು ಪ್ರೇರಣೆ ಸಿಗುತ್ತದೆ. ಪಾಠ ತಲುಪಿದವರು  mail@vedasudhe.com ಗೆ  ದಯಮಾಡಿ ಸಾಲುತ್ತರ ಬರೆಯುವಿರಾ?